ಸುದ್ದಿಯ ಸ್ವಾದಕ್ಕಾಗಿ ಕಾಫಿ ಬಾರಿಗೆ ಬನ್ನಿ
August 17, 2008 at 11:25 am 1 comment
ಕ್ಷಿತಿಜದ ಮೇಲೆ ಹಾರಾಡುವ ಗಾಳಿಪಟವ ನೋಡಿದ ಹುಡುಗ
ತನಗಿಲ್ಲದ್ದಕ್ಕೆ ಮರುಗುತ್ತಾ ನಿಂತಿರಲು,
ಫಳ್ಳನೆ ಎಳೆಬಿಸಿಲು ಹೊಳೆದು
ಜಂಗಿನುಲಿಯ ಮುದಿ ಜಂಗಮ ಬಂದ
ಬಾರೋ ಹುಡುಗ ಅಂದ,
ಬಂದರೆ ಮೊರದಗಲ ಅಂಗೈಯಲ್ಲಿದ್ದ ಬೇರೆ
ಗಾಳಿಪಟ ಕೊಟ್ಟು
ಹಾರಿಸೋ ಕಂದ
ಅದು ಹಾರುವಷ್ಟು ಆಕಾಶ ನಿಂದೇ ಅಂದ,
ಅಂದು ಮಾಯವಾದ.
ಆ ಮುದಿ ಜಂಗಮ ಯಾರೆಂದಿರಿ?
ಸಾವಳಗಿ ಶಿವಲಿಂಗ!
ನಾನೇ ಆ ಹುಡುಗ.
ಸುಮ್ಮನೆ ಕನ್ನಡದ ಬ್ಲಾಗ್ಗಳನ್ನು ಓದುತ್ತಾ ಇದ್ದವನಿಗೆ ನಿಂದೂ ಒಂದು ಬ್ಲಾಗ್ ಮಾಡು ಅಂದವನು ಮಂಗಳೂರಿನ ಗೆಳೆಯ ವೇಣುವಿನೋದ. ಆದಕ್ಕೆ ಟೆಕ್ನಿಕಲ್ ಬೆಂಬಲ ಕೊಟ್ಟವನು ಮಾಜಿ ರೂಮ್ಮೇಟ್ ಕುಮಾರ್. ಆದರೂ ಅಳುಕಿನಿಂದಲೇ ಕನ್ನಡದಲ್ಲಿ ಬ್ಲಾಗ್ ಬರೆಯೋಕೆ ಶುರು ಹಚ್ಚಿಕೊಳ್ಳುವಾಗ ಚಂದ್ರಶೇಖರ ಕಂಬಾರರ ಮೇಲಿನ ಪದ್ಯ ಬೆಟ್ಟದಷ್ಟು ಧೈರ್ಯ ತಂದೊಡ್ಡುತ್ತಿದೆ. ವರದಿಗಾರನಾಗಿ, ಜಂಗಮನಂತೆ ಸಂಚಾರಿಯಾಗಿ, ಓದಿಕೊಂಡ, ಕೇಳಿದ ಮತ್ತು ಕಂಡ ವಿಷಯಗಳ ಚಚರ್ೆ ಈ ಕಾಫಿಬಾರ್ನಲ್ಲಿ. ಇತಿಹಾಸದ ಪ್ರಕಾರ, ಕಾಫಿಬಾರ್ ಮತ್ತು ಕ್ಷೌರಿಕರ ಸಲೂನ್ಗಳು ಮಾಹಿತಿ ಸಂವಹನಕ್ಕೆ ಹೇಳಿಮಾಡಿಸಿದ ಜಾಗಗಳು. ಅಂತಹುದೇ ಕಾಫಿಬಾರ್ಗಳ ಪ್ರತಿಮೆ ಈ ಕಾಫಿಬಾರ್ ಕೂಡ ಮತ್ತು ಎಲ್ಲ ಲೈಟ್-ಸ್ಟ್ರಾಂಗ್ ವಿಷಯಗಳ ಸಂಗಮ. ಕಾಫಿಬಾರ್ ಅಂದೊಡನೆ ಹಿಂದೆ ಕಾಲೇಜಿನ ದಿನಗಳಲ್ಲಿ ರಸ್ತೆ ಬದಿಯ ಕಾಕ ಹೋಟೆಲಿನಲ್ಲಿ ಸಾಲ ಬರೆಸಿಯೋ ಅಥವಾ ಗೆಳೆಯರ ಲೆಕ್ಕದಲ್ಲೋ ಬೈಟು ಕಾಫಿ ಕುಡಿಯುತ್ತಾ ‘ಗುರೂ ನಾಳೆ ಫಸ್ಟ್ ಡೇ ಫಸ್ಟ್ ಷೋ ನೋಡ್ಲೇಬೇಕಮ್ಮ, ಆ ಟಕ್ಲು ನನ್ಮಗನ ಕ್ಲಾಸು ಏನು ಬೋರ್ ಹೊಡಿತಿತ್ತು ಮಾರಾಯ, ಮಗ, ಈ ಬೈಕ್ ಹೆಂಗಮಾ? ಇಂತ ಹತ್ತು ಹಲವು ವಿಷಯಗಳ ಫ್ಲಾಷ್ಬ್ಯಾಕ್ ಮಿಂಚಿ ಮಾಯವಾಗುತ್ತದೆ. ಅಂತಹುದೇ ನೈಜ ವಿಷಯಗಳ ನೇರ ಝಲಕ್ ಈ ಕಾಫಿಬಾರ್ನಲ್ಲಿ�
Entry filed under: Uncategorized. Tags: .

1.
venuvinod | August 29, 2008 at 5:51 am
ಕಾಫಿ ಬಾರ್ ಸಖತ್ತಾಗಿದೆ, ಇನ್ನಷ್ಟು ಬರೀರಿ