Archive for August 24, 2008
‘ಕೃಷ್ಣನಾ ಕೊಳಲಿನಾ…’

ಪ್ರೇಮಕ್ಕೆ ಪಲ್ಲವಿ ಬರೆದ ರಾಧೆಯ ಕೃಷ್ಣ,
ರಾಜಕಾರಣಕ್ಕೆ ಹೊಸ ತಂತ್ರ ಕಲಿಸಿದ ಮಥುರೆಯ ಕೃಷ್ಣ,
ಕಂಸ ಚಾರುನರಿಗೆ ಧರ್ಮದ ಗುದ್ದು ಕೊಟ್ಟ ಗೊಲ್ಲ ಕೃಷ್ಣ,
ಬೆಣ್ಣೆ ಕದ್ದು, ಪ್ರೀತಿ ಕದ್ದು, ಸುಧಾಮನ ಅವಲಕ್ಕಿ ಮೆದ್ದು,
ಗರ್ಭ ಗುಡಿಯ ಕತ್ತಲೆಯೊಳಗೆ ಪ್ರೀತಿ-ಧರ್ಮದ ಬೆಳಕು ಸೂಸುವ ಕನಕನ ಕೃಷ್ಣ,
ಈ ಅಷ್ಟಮಿಯ ಸಂದರ್ಭದಲ್ಲಿ, ನಿನಗೆ ನೂರು ನಮನ.
ಶೂನ್ಯದಲ್ಲಿ ಶಬ್ದ ಹುಟ್ಟುವ ನಿನ್ನ ವಂಶಿಯ ನಾದ, ಬ್ರಹ್ಮಾಂಡವನ್ನು ಸುಸ್ಥಿತಿಯಲ್ಲಿರಿಸಲಿ.
Recent Comments