‘ಕೃಷ್ಣನಾ ಕೊಳಲಿನಾ…’
August 24, 2008 at 2:29 pm Leave a comment

ಪ್ರೇಮಕ್ಕೆ ಪಲ್ಲವಿ ಬರೆದ ರಾಧೆಯ ಕೃಷ್ಣ,
ರಾಜಕಾರಣಕ್ಕೆ ಹೊಸ ತಂತ್ರ ಕಲಿಸಿದ ಮಥುರೆಯ ಕೃಷ್ಣ,
ಕಂಸ ಚಾರುನರಿಗೆ ಧರ್ಮದ ಗುದ್ದು ಕೊಟ್ಟ ಗೊಲ್ಲ ಕೃಷ್ಣ,
ಬೆಣ್ಣೆ ಕದ್ದು, ಪ್ರೀತಿ ಕದ್ದು, ಸುಧಾಮನ ಅವಲಕ್ಕಿ ಮೆದ್ದು,
ಗರ್ಭ ಗುಡಿಯ ಕತ್ತಲೆಯೊಳಗೆ ಪ್ರೀತಿ-ಧರ್ಮದ ಬೆಳಕು ಸೂಸುವ ಕನಕನ ಕೃಷ್ಣ,
ಈ ಅಷ್ಟಮಿಯ ಸಂದರ್ಭದಲ್ಲಿ, ನಿನಗೆ ನೂರು ನಮನ.
ಶೂನ್ಯದಲ್ಲಿ ಶಬ್ದ ಹುಟ್ಟುವ ನಿನ್ನ ವಂಶಿಯ ನಾದ, ಬ್ರಹ್ಮಾಂಡವನ್ನು ಸುಸ್ಥಿತಿಯಲ್ಲಿರಿಸಲಿ.
Entry filed under: Uncategorized. Tags: .
Trackback this post | Subscribe to the comments via RSS Feed