ಕವಡೆ ಕಿಮ್ಮತ್ತೂ ಇಲ್ಲದ ದಸರೆಯ ಕಾವಡಿಗಳು, ಮಾವುತರು!
September 5, 2008 at 2:46 pm Leave a comment

ವಿಶ್ವವಿಖ್ಯಾತ ಜಂಬೂಸವಾರಿ ಖ್ಯಾತಿಯ, ಮೈಸೂರು ದಸರಾ ಆರಂಭಕ್ಕೆ ಕೊನೆಯ ಹಂತದ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಉತ್ಸವದ ಬಗೆಗಿನ ವಾದ-ವಿವಾದಗಳು ದಿನಗಳೆದಂತೆ ಗರಿಗೆದರಿಕೊಳ್ಳುತ್ತಿವೆ. ನಾಡ ಹಬ್ಬದ ಅದ್ದೂರಿ ಮೆರವಣಿಗೆಯ ಕ್ರಮಾಂಕ ಬದಲಾವಣೆಯಿಂದ ಹಿಡಿದು, ದಸರಾ ಉತ್ಸವದ ಉದ್ಘಾಟನೆವರೆಗೂ ಪರ-ವಿರೋಧದ ಚಚರ್ೆ ಅಲೆ,ಅಲೆಯಾಗಿ ತೇಲಿ ಬರುತ್ತಿದೆ. ಆದರೆ ಉತ್ಸವದ ಆನೆಗಳ ಮಾವುತರು ಮತ್ತು ಕಾವಡಿಗಳ ಅರಣ್ಯರೋದನ, ಉಳಿದೆಲ್ಲ ವಿಷಯಗಳಿಗಿಂತ ಮತ್ತು ಮಾನವೀಯತೆ ದೃಷ್ಟಿಯಿಂದ, ಈ ಬಾರಿಯ ದಸರಾ ಸಿದ್ಧತೆಯಲ್ಲಿ ನಾಡಿನ ಗಮನ ಸೆಳೆದ ಅಂಶ. ಭೂ ಗ್ರಹದ ಮೇಲಿನ ಪಸ್ತುತ ಜೀವಿಗಳಲ್ಲೇ ಅತ್ಯಂತ ದೈತ್ಯವೆನಿಸಿರುವ ಆನೆಗಳನ್ನು ಹಿಡಿದು ಪಳಗಿಸಿ, ಐತಿಹಾಸಿಕ ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮಾಡುವ ಮಾವುತರು, ಕಾವಡಿಗಳಿಗೆ ಬದುಕು ನಡೆಸುವುದೇ ದುಸ್ತರವೆನಿಸಿಬಿಟ್ಟಿದೆ ಕಳೆದ ಕೆಲ ವರ್ಷಗಳಿಂದ.
ಹೆಸರಿಗೆ ಸಕರ್ಾರದ ಅರಣ್ಯ ಇಲಾಖೆಯ ಆನೆಗಳ ಯೋಗಕ್ಷೇಮ ನೋಡಿಕೊಳ್ಳುವ ಮಾವುತರು-ಕಾವಡಿಗಳಿಗೆ, ತಮ್ಮ ಜೀವನದ ಯೋಗಕ್ಷೇಮ ವಿಚಾರಿಸುವವರೇ ಇಲ್ಲದಂತಾಗಿದೆ. ಹಲವು ವರ್ಷಗಳಿಂದ, ಮಾಡುವ ಕೆಲಸಕ್ಕೆ ಸಂಬಳವಿಲ್ಲದಿದ್ದರೂ ಸೌಮ್ಯವಾಗಿಯೇ ಕಾರ್ಯ ನಿರ್ವಹಿಸುತ್ತಾ, ನಾಡಹಬ್ಬಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಿದ್ದ ಮಾವುತರು, ಯಾವಾಗ ಜೀವನ ನಡೆಸುವುದೇ ಕಷ್ಟವೆನಿಸಿತೋ, ಆಗ ಆನೆ ತಿವಿಯುವ ಅಂಕುಶವನ್ನು, ಕುಂಭಕರ್ಣ ನಿದ್ದೆಯಲ್ಲಿದ್ದ ಸಕರ್ಾರದ ವಿರುದ್ಧ ಹಿಡಿದು ನಿಂತರು. ನಿತ್ಯವೂ ಜೊತೆಯಲ್ಲೇ ಕಾರ್ಯ ನಿರ್ವಹಿಸುತ್ತಾ, ಇವರ ಕಷ್ಟಗಳನ್ನು ಕಂಡೂ ಕಾಣದಂತೆ ವತರ್ಿಸುತ್ತಿದ್ದ ಅರಣ್ಯಾಧಿಕಾರಿಗಳ ವಿರುದ್ಧ, ಈ ಬಾರಿ ಸಾಂಪ್ರದಾಯಿಕ ‘ಗಜಪಯಣದ’ ಸಂದರ್ಭದಲ್ಲಿ ಸಿಡಿದೆದ್ದರು. ಕಾಡಿನ ಕೆಲ ಆದಿವಾಸಿ ಗುಂಪುಗೊಳಗೂಡಿ ನಾಗರಹೊಳೆ ಅರಣ್ಯದಿಂದ ಆರಂಭವಾಗುವ ಪಯಣವನ್ನೇ ಬಹಿಷ್ಕರಿಸುವ ಬೆದರಿಕೆಯನ್ನೂ ಒಡ್ಡಿದರು.
ಅಲ್ಲಿವರೆಗೂ, ಮಾವುತರು-ಕಾವಡಿಗಳೆಂದರೆ ಬರೀ ಚಿಲ್ಲರೆ ಕಾಸಿಗಾಗಿ, ನಗರದ ಮಕ್ಕಳುಗಳನ್ನು ಆನೆಯ ಬೆನ್ನ ಮೇಲೆ ಹೊರಿಸಿ ಕೂಸುಮರಿ ಮಾಡಿಸುವ ಜೋಕರ್ಗಳಂತೆ ಕಾಣುತ್ತಿದ್ದ, ನಗರ ಭಾಗದ ಜನರೂ ಅವರ ದುರ್ಬರ ಬದುಕಿನ ಬಗ್ಗೆ ಮನಗಂಡು ಸಕರ್ಾರಕ್ಕೆ ಹಿಡಿಶಾಪ ಹಾಕತೊಡಗಿದಾಗ, ಅಧಿಕಾರಿಗಳು ಎಚ್ಚೆತ್ತುಕೊಂಡರು. ನಾಡಹಬ್ಬದ ಪ್ರಮುಖ ಆಕರ್ಷಣೆಯ ಹಿತರಕ್ಷಣೆಗಾಗಿ, ಕಾರಣಾಂತರಗಳಿಂದ ತಡೆಹಿಡಿಯಲಾಗಿದ್ದ ಮಾವುತರ ಸಂಬಳ ಬಿಡುಗಡೆಗೆ ಸಕರ್ಾರ ಹಸಿರು ನಿಶಾನೆ ತೋರಿಸಿತು. ಗಜಪಯಣದ ಹಿನ್ನೆಲೆಯಲ್ಲಿ, ಆಸಕ್ತ ಮಾಧ್ಯಮ ಮಿತ್ರರೊಂದಿಗೆ, ನೊಂದ ಮಾವುತರು-ಕಾವಡಿಗಳು ದಸರೆಯ ಇನ್ನೊಂದು ಮಗ್ಗುಲನ್ನು ಅನಾವರಣಗೊಳಿಸುತ್ತಿದ್ದರು.
“ಇಲಾಖೆಯಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿರುವ ನಮಗೆ ದಿನವೊಂದಕ್ಕೆ 100 ರೂ ಭತ್ಯೆ ನೀಡಬೇಕು. ಆದರೆ ಕಳೆದ ಕೆಲ ವರ್ಷಗಳಿಂದ ಆ ಭತ್ಯೆಗೂ ತತ್ವಾರ ಬಂದೊದಗಿದೆ. ಆದರೆ ಇದೀಗ ದಸರೆ ಆರಂಭವಾಗುತ್ತಿದಂತೆ, ಅರಣ್ಯಾಧಿಕಾರಿಗಳು ಒಂದು ರೀತಿಯಲ್ಲಿ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ದಸರೆಗೆ ಹೊರಡುತ್ತಿರುವ ಮಾವುತ-ಕಾವಡಿಗಳ ಸಂಬಳವನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ,” ಎಂದರು ನೊಂದ ಕಾವಡಿಯೊಬ್ಬರು. ಪಯಣದ ಆರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಕರಂದ್ಲಾಜೆ ಮೇಡಮ್ ಬರುವ ಹೊತ್ತಿಗೆ, ಮಾವುತರ ಪ್ರತಿಭಟನೆಯ ಕಾವು ತಟ್ಟಿದ ಅಧಿಕಾರಿಗಳು, ಅಲ್ಲಿನ ಸಂಸದರ ಸಮ್ಮುಖದಲ್ಲೇ ಬಿಡುಗಡೆಯಾಗಿ ಬಂದಿರುವ 3.5 ಲಕ್ಷ ಅನುದಾನದಲ್ಲಿ ಸಂಬಳ ನೀಡಲಾಗುವುದೆಂದು ಘೋಷಿಸಿದರು. ಬರೀ ಘೋಷಣೆಗೆ ಜಗ್ಗದ ಮಾವುತರು, ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್ರವರ ಮಧ್ಯಸ್ಥಿಕೆಯಿಂದಾಗಿ, ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.
ಕೇವಲ ಈ ಬಾರಿಯಷ್ಟೇ ತಾರಕಕ್ಕೇರಿದ ಮಾವುತರ-ಕಾವಡಿಗಳ ಪ್ರತಿಭಟನೆ, ಹೊಸದೇನಲ್ಲ. ಕಳೆದ ಕೆಲ ವರ್ಷಗಳಿಂದ ಚಚರ್ೆಗೆ ಗ್ರಾಸವಾಗುತ್ತಲೇ ಬಂದಿರುವ ಮಾವುತರ ಬವಣೆಗೆ ಆನೆಗಳಷ್ಟೇ ವಯಸ್ಸೂ ಆಗಿದೆ! ಒಂದು ಲೆಕ್ಕದ ಪ್ರಕಾರ ಇದೀಗ ಇಲಾಖೆಯ ಆನೆ ಶಿಬಿರಗಳಲ್ಲಿ ಅಂದಾಜು 200 ಪಳಗಿಸಿದ ಆನೆಗಳು ಆಶ್ರಯ ಪಡೆದಿವೆ. ಲೆಕ್ಕದ ಪ್ರಕಾರ ಒಂದು ಆನೆಗೆ ಒಬ್ಬ ಮಾವುತ ಮತ್ತು ಅವನ ಸಹಾಯಕ್ಕೆ ಒಬ್ಬ ಕಾವಡಿಯ ಅವಶ್ಯಕತೆಯಿದೆ. ಆದರೆ, ಐತಿಹಾಸಿಕ ‘ಖೆಡ್ಡಾ’ ಕಾಯರ್ಾಚರಣೆಯ ನಿಷೇಧದ ನಂತರ, ಮಾವುತರ ನೇಮಕಾತಿಯನ್ನು ಕೆಲಮಿತಿಯವರೆಗೆ ನಿಲ್ಲಿಸಿದ ಸಕರ್ಾರ, ಈಗ ಕಾರ್ಯನಿರ್ವಹಿಸುತ್ತಿರುವ ಮಾವುತರನ್ನು-ಕಾವಡಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿತ್ತು. ಅಲ್ಲದೆ, ಮಾವುತರಾಗಿ ನೇಮಕಗೊಂಡ ಎಲ್ಲರೂ ಕಾಡಿನ ಆದಿವಾಸಿ ಗುಂಪುಗಳಿಗೆ ಸೇರಿದವರು ಇಲ್ಲವೇ ಕಾಡಿನಂಚಿನ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಗಿರಿ ಜನರು ಮೈಸೂರಿನ ಕಾಡುಗಳಲ್ಲಿ ಮಾವುತರಾಗಿ ಸೇರಿಕೊಂಡರೆ, ಮುಸ್ಲಿಮರು ಶಿವಮೊಗ್ಗ,ಕೊಡಗಿನ ಕಾಡುಗಳಲ್ಲಿ ಮಾವುತರಾಗಿ ಇಲಾಖೆ ಸೇರಿದರು.
ಹುಟ್ಟಿನಿಂದಲೇ ಆನೆ ಪಳಗಿಸುವ ವಿದ್ಯೆ ಕಲಿಯುವ ಗಿರಿಜನರು, ಆನೆಗಳ ನಿತ್ಯದ ಒಡನಾಟದಿಂದ ತಾವು ಕಲಿತ ವಿದ್ಯೆಯನ್ನು ಹಾಗೆಯೇ ತಮ್ಮ ಮಕ್ಕಳಿಗೂ ಮಾತಿಗಿಂತ ಮುಂಚೆಯೇ ಕಲಿಸಿಬಿಡುತ್ತಾರೆ ಮಾವುತರು. ಹಾಗಾಗಿ ಮಾವುತರ ಕೆಲಸ ಇವರಿಗೇ ಕಟ್ಟಿಟ್ಟ ಬುತ್ತಿ. ಆದರೆ ಇದೀಗ 37 ಜನ ಮಾವುತರ ಸೇವೆಯನ್ನು ಖಾಯಂ ಮಾಡುವ ನಿಧರ್ಾರ ತಳೆದಿರುವ ಯಡಿಯೂರಪ್ಪ ಸಕರ್ಾರ, ಬಳಲಿದ್ದ ಮಾವುತರ-ಕಾವಡಿಗಳ ಬದುಕಿಗೆ ನೆಮ್ಮದಿ ತಂದೊಡ್ಡಿದೆ.
ಬಲರಾಮ
ರಾಜೀವ್ಗಾಂಧಿ ರಾಷ್ಟ್ರೀಯ ಉದ್ಯಾನವನ (ನಾಗರಹೊಳೆ) ವ್ಯಾಪ್ತಿಯ ಮತಿಗೋಡು ಆನೆ ಶಿಬಿರದ ನಿವಾಸಿ 50 ವರ್ಷದ ಬಲರಾಮನನ್ನು 1987ರಲ್ಲಿ ಕಟ್ಟೆಪುರ ಅರಣ್ಯದಲ್ಲಿ ಸೆರೆ ಹಿಡಿಯಲಾಯಿತು. ಕಳೆದ 14 ವರ್ಷಗಳಿಂದ ಸಾಂಸ್ಕೃತಿಕ ರಾಜಧಾನಿ ಮೈಸೂರು ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಬಲರಾಮ 1999ರಿಂದ, ಮೆರವಣಿಗೆಯ ಮುಖ್ಯ ಭಾಗವಾದ ಅಂಬಾರಿಯನ್ನು ಹೊರುತ್ತಿದ್ದಾನೆ.
ಅಭಿಮನ್ಯು
42 ವರ್ಷದ ಅಭಿಮನ್ಯುವನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. ಇದೀಗ ನಾಗರಹೊಳೆಯ ಮೂರ್ಕಲ್ ಆನೆ ಶಿಬಿರದಲ್ಲಿರುವ ಅಭಿಮನ್ಯು ಕಳೆದ 10 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಾ, ಸಾಂಪ್ರದಾಯಿಕ ‘ಆನೆಗಾಡಿ’ ಎಳೆಯುವ ಜವಾಬ್ದಾರಿ ಹೊತ್ತಿದ್ದಾನೆ.
ವಿಜಯ
1963ರಲ್ಲಿ ದುಬಾರೆ ಅರಣ್ಯ ಪ್ರದೇಶದಲ್ಲಿ ಸೆರೆಸಿಕ್ಕ ನಂತರ ದುಬಾರೆ ಆನೆ ಶಿಬಿರದಲ್ಲೇ ವಾಸವಾಗಿರುವ ಸೌಮ್ಯ ಸ್ವಭಾವದ 51 ವರ್ಷದ ಹೆಣ್ಣಾನೆ ವಿಜಯ ಕಳೆದ ಐದು ವರ್ಷಗಳಿಂದ ದಸರೆಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ.
ಗಜೇಂದ್ರ
ಕಳೆದ 12 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿರುವ 53 ವರ್ಷದ ಗಜೇಂದ್ರನನ್ನು ನಾಗರಹೊಳೆಯ ಕಟ್ಟೆಪುರ ಅರಣ್ಯದಲ್ಲಿ ಸೆರೆಹಿಡಿಯಲಾಗಿತ್ತು.
ಅಜರ್ುನ
ಒಂದೇ ಒಂದು ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ 47 ವರ್ಷದ ಅಜರ್ುನನ್ನು ಕೊಡಗಿನ ಹೆಬ್ಬಳ್ಳ ಅರಣ್ಯದಲ್ಲಿ 1969ರಲ್ಲಿ ಹಿಡಿಯಲಾಗಿತ್ತು. ಬಾಳ್ಳೆ ಆನೆ ಶಿಬಿರದ ನಿವಾಸಿ ಅಜರ್ುನ ಕಳೆದ ಏಳು ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದಾನೆ.
ಸರಳ
ನಾಗರಹೊಳೆಯ ಸುಂಕದಕಟ್ಟೆ ಆನೆ ಶಿಬಿರದ ಸರಳಳನ್ನು 1977 ರಲ್ಲಿ ಕಾಕನಕೋಟೆ ಅರಣ್ಯದಲ್ಲಿ ಹಿಡಿಯಲಾಗಿತ್ತು. ದಸರೆಯ ಆನೆಗಳಲ್ಲೇ ಅತ್ಯಂತ ಜೂನಿಯರ್ ಎನಿಸಿರುವ ಸರಳ ಕಳೆದ 4 ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದಾಳೆ.
Entry filed under: Uncategorized. Tags: .

Trackback this post | Subscribe to the comments via RSS Feed