Slumdog Millionaire; ಸ್ಲಂ ಜಗತ್ತಿನ ಕುಸುಮಬಾಲೆ

January 24, 2009 at 6:38 am 1 comment

ಸ್ಲಮ್ಡಾಗ್ ಮಿಲಿಯನೇರ್ ಬಗ್ಗೆ ಇದುವರೆವಿಗೂ ಮೂಡಿಬಂದಿರುವ ಪ್ರತಿಕ್ರಿಯೆಗಳು, ಅನಿಸಿಕೆಗಳು ಆ ಸಿನೆಮಾದಲ್ಲಿ ಚಚರ್ಿಸಬೇಕಾದ ಬಹುತೇಕ ಮಜಲುಗಳ ಬಗ್ಗೆ ಈಗಾಗಲೇ ವಿಸ್ತೃತವಾಗಿ ಚಚರ್ೆ ಮಾಡಿ ಮುಗಿಸಿಬಿಟ್ಟಿವೆಯಾದರು, ನನ್ನ ಅಭಿಪ್ರಾಯ ಅಳಿದುಳಿದ ಕೆಲವೇ ಕೆಲವು ಸಂಗತಿಗಳ ಬಗ್ಗೆ. ದೂರದ ಬೆಳಗಾವಿಯಲ್ಲಿ ನಡೆಯುತ್ತಿರುವ ಸದನದ ಕಲಾಪಗಳ ವರದಿಗಾರಿಕೆಯ ತಲೆಬಿಸಿಯ ನಡುವೆಯೂ ನಾನು ಬಿಟ್ಟು ಬಿಡದೆ ನೋಡಿದ ಸಿನೆಮಾ. ಹಾಗಂದ ಮಾತ್ರಕ್ಕೆ ಇದು ಅತ್ಯತ್ತಮ ಸಿನೆಮಾ ಅಥವಾ classic ಎಂದೇನು ಅಲ್ಲ ಬದಲಿಗೆ Art for Art Sake  ಎನ್ನುವ ಥಿಯರಿಯ ನೆಲೆಯಲ್ಲಿ ನೋಡಿದಾಗ ಚಿತ್ರದ ಬಹುತೇಕ ಅಂಶಗಳು ಅದ್ಭುತವೆನಿಸುತ್ತವೆ.

dev-and-freida

 

ನಾವು ಬೆಳೆದುಬಂದ ಮನಸ್ಥಿತಿಯೋ ಅಥವಾ ನಮ್ಮಗಳ ಗುಣವೇ ಅಂಥದೋ ತಿಳಿಯದು. ಗಲೀಜು,  ಅಥವಾ ನೇತ್ಯಾತ್ಮಕವಾಗಿ ನಮ್ಮ ದೇಶವನ್ನು ಕಲ್ಪಿಸಿಕೊಳ್ಳಲಾಗದ ಮನಸ್ಥಿತಿ. ಬಹುಷಃ ಈ ಹಿನ್ನೆಲೆಯಲ್ಲಿಯೇ ನಮ್ಮಲ್ಲಿ ಬಹುತೇಕರಿಗೆ ಸ್ಲಮ್ಡಾಗ್ ಮಿಲಿಯನೇರ್ ಒಂದು ಭಾರತ ವಿರೋಧಿ ಚಿತ್ರ. ಆದರೆ ಅವನ್ನೆಲ್ಲ ಬದಿಗಿರಿಸಿ ಬರೀ ಸಿನೆಮಾ ಮಾಧ್ಯಮದ ಹಿನ್ನೆಲೆಯಲ್ಲಿ, ಸ್ಲಮ್ಡಾಗ್ ಮಿಲಿಯನೇರ್ ನಾವು ನೋಡದ ಭಾರತವೊಂದರ ಸಚಿತ್ರ ವರದಿಯನ್ನು ಬಿಚ್ಚಿಡುತ್ತಾ ಸಾಗುತ್ತದೆ. 
  ಚಿತ್ರದುದ್ದಕ್ಕೂ ಗಮನ ಸೆಳೆಯುವ ಅಂಶವೆಂದರೆ -ಜೀವನಾನುಭವ. ಯಾವೊಂದು ಶಾಲೆ-ಕಾಲೇಜು, ವಿಶ್ವವಿದ್ಯಾಲಯಗಳು ಕಲಿಸದ ಪಾಠವನ್ನು, ಮುಂಬೈನ ಸ್ಲಂ ಜಗತ್ತು ಜಮಾಲನಿಗೆ ಕಲಿಸುತ್ತದೆ. ಜೀವನದಲ್ಲಿ ಕಲಿತ ಪಾಠವನ್ನು ಕ್ಲುಪ್ತ ಸಮಯದಲ್ಲಿ ಬಳಸಿಕೊಂಡು, ಹಂತ-ಹಂತವಾಗಿ ಮೇಲೇರುವುದು ಚಿತ್ರದ ಪ್ರಮುಖ ಅಂಶ. ಉಳಿದೆಲ್ಲ ಸ್ಲಂ ಕುರಿತಾದ ಚಿತ್ರಗಳಲ್ಲಿ, ಬರೀ ಸ್ವೇಚ್ಛಾಚಾರವನ್ನೋ ಅಥವಾ ಕಿತ್ತು ತಿನ್ನುವ ಬಡತನವನ್ನೋ, ಅನಕ್ಷರತೆಯನ್ನು ವಿಜೃಂಭಿಸಿದರೆ, ಇಲ್ಲಿ ಸ್ಲಂ ಜಗತ್ತಿನ ಜೀವನಪಾಠವನ್ನೇ ಬಂಡವಾಳ ಮಾಡಿಕೊಂಡ ಚಾಯ್ವಾಲಾ, ಸುಂದರ ಬದುಕೊಂದನ್ನು ಕಟ್ಟಿಕೊಳ್ಳುವ ಪಾಠ, ನಮ್ಮ ಶಿಕ್ಷಣನೀತಿ ರೂಪಿಸುವ ನಾಯಕರಿಗೆ ಮಾದರಿ. ಅಲ್ಲದೇ ಇಂದಿನ ಸ್ಲಂ ಜಗತ್ತಿನೊಳಗೆ ಅಡಗಿರುವ ಅದೆಷ್ಟೋ ಜಮಾಲ್ನಂತ ಪ್ರತಿಭೆಗಳಿಗೆ ಸ್ಲಮ್ಡಾಗ್ ಮಿಲಿಯನೇರ್ ಮಾದರಿಯಾಗಿ, ಸಮಾಜದ ‘ದೇವರಿಗೆ’ ಸ್ಲಂ ಕೆಸರಿನ ‘ಕಮಲಗಳೂ’ ಅರ್ಹ ಎಂಬ ಸಂದೇಶವಂತೂ ಸ್ಫುಟವಾಗಿ ಬಿಂಬಿತವಾಗಿದೆ. ಬದುಕನ್ನ ಅಥರ್ೈಸಿಕೊಳ್ಳುವ ರೀತಿಯಲ್ಲಿ, ಜಮಾಲ ಟೈಟಾನಿಕ್ ಚಿತ್ರದ ಜಾಕ್ನಂತೆ. ಜೀವನದಲ್ಲಿ ಬಂದದನ್ನು ಬಂದಹಾಗೇ ತೆಗೆದುಕೊಂಡು, ..
to me every day counts ಎನ್ನುವ ಶೈಲಿ, ಬೆರಗು ಹುಟ್ಟಿಸುವಂತದ್ದು.
    ಬಹುಷಃ, ಒಂದು ದೃಷ್ಟಿಕೋನದಲ್ಲಿ, ಇಡೀ ಚಿತ್ರವನ್ನು ಬ್ರೆಜಿಲ್ನ ಸಿಟಿ ಆಫ್ ಗಾಡ್ಸ್ನ ಮಾದರಿಯಲ್ಲೇ ತೆಗೆಯಲಾಗಿದ್ದರು, ಸ್ಲಮ್ಡಾಗ್ ಮಿಲಿಯನೇರ್, ಸಿಟಿ ಆಫ್ ಗಾಡ್ಸ್ ತೋರಿಸಿದ ಸ್ಲಂಗಿಂತ, ಅದರೊಳಗಿನ ವಿಭಿನ್ನ ಜಗತ್ತೊಂದನ್ನು ಪರಿಚಯಿಸುತ್ತದೆ. ಜಮಾಲ್ ಮತ್ತು ಸಲೀಮ್ ಜೊತೆಗೆ ಲತಿಕಾ, ಒಂದೇ ಸ್ಲಂನ ಹಿನ್ನೆಲೆ ಹೊಂದಿದ್ದರು, ಮೂರು ಪಾತ್ರಗಳು ವಿಭಿನ್ನ ವ್ಯಕ್ತಿತ್ವಗಳ ಬೆನ್ನು ಹತ್ತಿ ಹೊರಟವರು. ಸಲೀಮನಿಗೆ ವರ್ತಮಾನದ ಚಿಂತೆಯಾದರೆ (ಪ್ರಾಕ್ಟಿಕಲ್), ಜಮಾಲನ ಚಿತ್ತ ಭವಿಷ್ಯದತ್ತ. ಇವೆರಡರ ನಡುವೆ ಅಸ್ಥಿತ್ವ ಮತ್ತು ಪ್ರೀತಿಗಾಗಿ ಹಾತೊರೆಯುವ ಪಾತ್ರ ಲತಿಕಾ. ಆದರೆ ಸಿಟಿ ಆಫ್ ಗಾಡ್ಸ್ ನ ಬಹುತೇಕ ಫ್ರೇಮ್ನಲ್ಲಿ ವಿಜೃಂಭಿಸುವುದು ಹಿಂಸೆ ಮತ್ತು ಕೌರ್ಯ. ಆ ಮಟ್ಟಿಗೆ ಸಮಾಧಾನದ ವಿಷಯವೆಂದರೆ, ನಮ್ಮ ಸ್ಲಂಗಳ ಕತ್ತಲ ಬದುಕನ್ನು ಹಲವು ಹಂತಗಳಲ್ಲಿ ತೋರಿಸಿ ಪ್ರಶಂಸೆ ಗಳಿಸಿದ ಸಲಾಂ ಬಾಂಬೆ ಅಥವಾ ಸಿಟಿ ಆಫ್ ಜಾಯ್ ಚಿತ್ರಗಳಿಗಿಂತ, ಸ್ಲಮ್ಡಾಗ್ ಮಿಲಿಯನೇರ್ ಒಪ್ಪಬಹುದಾದ ಸ್ಲಂ ಪ್ರಪಂಚವನ್ನು ತೋರಿಸಿದೆ. ಇತರೆ ಸ್ಲಂಗಳಲ್ಲಿ ಸಾಮಾನ್ಯವೆನಿಸಬಹುದಾದ ಡ್ರಗ್ಸ್, ಧೂಮಪಾನ, ಕುಡಿತ, ಲೈಂಗಿಕ ಶೋಷಣೆ, ಮೂಲಭೂತ ಹಕ್ಕುಗಳ ಉಲ್ಲಂಘನೆ ಮುಂಬೈನ ಸ್ಲಂಗಳಲ್ಲಿ ಇದೆಯಾದರೂ, ಅದ್ಯಾವುದು ಚಿತ್ರದಲ್ಲಿ ನೇರವಾಗಿ ಪ್ರಸ್ತಾಪವಾಗಿಲ್ಲ. ಆ ಮಟ್ಟಿಗೆ ಸ್ಲಮ್ಡಾಗ್ ಮಿಲಿಯನೇರ್ ನಮ್ಮ ರೀತಿ-ರಿವಾಜುಗಳನ್ನು ಸರಿ ರೀತಿಯಲ್ಲೇ ಅಥರ್ೈಸಿಕೊಂಡಿದೆ. ಏರ್ಪೋರ್ಟ್ ಪೋಲೀಸರು ಅಟ್ಟಿಸಿಕೊಂಡು ಬರುವಾಗ ತೋರಿಸುವ ಸ್ಲಂನ ಓಣಿಗಳ ಅಚ್ಚುಕಟ್ಟು, ರೈಲುಹಳಿಗಳ ಬದಿಯ ದೋಭಿಘಾಟ್ನ ಸ್ವಚ್ಚ ಪರಿಸರ, ಕಿಷ್ಕಿಂಧೆಯಂತೆ ಕಂಡುಬಂದರೂ, ಕೊಳಕಿಲ್ಲದೆ ಅಚ್ಚುಕಟ್ಟಾಗಿ ಬಿಂಬಿತವಾಗಿವೆ.
     ಇನ್ನು ಭಾರತ 21ನೇ ಶತಮಾನದ ಹೊಸ ಆಥರ್ಿಕ ಸೂಪರ್ ಪವರ್ ಎಂದು ಬಿಂಬಿತವಾಗುತ್ತಿರುವ ಸಮಯದಲ್ಲಿ, ಸ್ಲಮ್ಡಾಗ್ ಮಿಲಿಯನೇರ್ನ ಚಿತ್ರಣ, ಚಿತ್ರಕಥೆ ಭಾರತದ ಸೂಪರ್ ಪವರ್ ಇಮೇಜಿನ ಸಮಗ್ರ ವಿಶ್ಲೇಷಣೆ ಎನ್ನಬಹುದು. ಪಾಶ್ಚಿಮಾತ್ಯ ದೇಶಗಳು, ಕೊಂಚ ಕೌತುಕದಿಂದಲೇ ಪೌರಾತ್ಯ ದೇಶಗಳ ಮುನ್ನಡೆಯನ್ನು ಗಮನಿಸುತ್ತಿರುವ ಸಂದರ್ಭದಲ್ಲಿ, ಭಾರತೀಯರು ಬರೀ ಜೀವನಕ್ರಮದಿಂದಲೇ ಬದುಕಿನ ಸವಾಲುಗಳನ್ನು ಯಾರ ಹಂಗಿಲ್ಲದೇ ನಿಭಾಯಿಸಬಲ್ಲ ಚಾಣಾಕ್ಷರು ಮತ್ತು ತೀರ ನಿಕೃಷ್ಟವೆಂದು ತಳ್ಳಿಹಾಕುವ ಭಾರತದ ಸ್ಲಂಗಳಲ್ಲೂ ಪ್ರತಿಭೆಯ ಭಾರೀ ನಿಕ್ಷೇಪದ ಸದುಪಯೋಗವನ್ನು ಸೂಕ್ಷ್ಮವಾಗಿ ಚಿತ್ರ ಪ್ರಸ್ತಾಪಿಸಿದೆ.
    ಇನ್ನು ಈ ರೀತಿ ತೆಗೆದ ಚಿತ್ರ ಎಂದೇ ಪರಿಗಣಿತವಾಗಿ ಪ್ರಶಸ್ತಿ ಗಳಿಸಿದೆ ಎಂಬ ವಿತಂಡವಾದ ಮಂಡಿಸುವವರು, ಸ್ವಲ್ಪ ಗಮನಿಸಬೇಕಾದ ಅಂಶವೆಂದರೆ, ಇನ್ಯಾವ ರೀತಿಯಲ್ಲಿ ಚಿತ್ರ ತೆಗೆಯಬೇಕಿತ್ತು ಅನ್ನುವುದು. ನಮ್ಮ ಕನ್ನಡ, ಹಿಂದಿ ಭಾಷಾ ಚಿತ್ರಗಳ ಚೆಲ್ಲು,ಚೆಲ್ಲು ಶೈಲಿಯ, ಅಸಂಗತ ಚಿತ್ರಕಥೆಗಳಿಗಿಂತ, ನೈಜತೆ ಮತ್ತು ಸಂದೇಶ ಹೊತ್ತ, ಸ್ಲಮ್ಡಾಗ್ ಮಿಲಿಯನೇರ್ ಅದೆಷ್ಟೋ ಪಾಲು ಮೇಲು. ಟೀನಾ ಮೇಡಮ್ ಹೇಳಿದಂತೆ, ಬಣ್ಣದ ಬಳಕೆಯ ಬಗ್ಗೆ ಹೇಳುವುದಾದರೆ, ಅದೇ ಏಲಿಯಟ್ನ
The Waste Landನ ಮೊದಲ ಕೆಲ ಸಾಲುಗಳು ನೆನಪಿಗೆ ಬರುತ್ತದೆ. ಚಿತ್ರದ ಉದ್ದಕ್ಕೂ ಕಂಡುಬರುವ ಹಳದಿ ಬಣ್ಣವನ್ನು ಅಥೈಸಿಕೊಳ್ಳುವುದಾದರೆ, ಫ್ರಾಯ್ಡ್ನ ಥಿಯರಿ ಸಹಕಾರಿ. ಆತನ ಪ್ರಕಾರ ಹಳದಿ ಒಂದು ರೀತಿಯ ರೋಗಗ್ರಸ್ಥ ಅಥವಾ ಅಸ್ಪಷ್ಟ ಬದುಕಿನ, ನಿರೀಕ್ಷೆಯ ಸಂಕೇತ, ಅದೇರೀತಿ ಆ ಬಣ್ಣವನ್ನು ಬಳಸಿಕೊಳ್ಳಲಾಗಿದೆ.     

dev-and-anil
     ಸ್ಲಂ ಮಕ್ಕಳು ಬರೀ ಕಳ್ಳರು, ಪೋಲಿಗಳು, ಶುಚಿಯಲ್ಲದ ಜೀವನಶೈಲಿ ಹೊಂದಿರುವವರು ಎಂಬ ಬಹುತೇಕ ಭಾರತೀಯರ ಭಾವನೆಯನ್ನು ನಿರಚನೆ ಮಾಡುವ ಹೊಸ ಪ್ರಯೋಗ. But ಇದನ್ನು ಒಪ್ಪಿಕೊಂಡು ಅರಗಿಸಿಕೊಳ್ಳಬೇಕಷ್ಟೆ. ನೆನಪಿರಲಿ-ಸತ್ಯ ಯಾವತ್ತಿದ್ದರೂ ಕಹಿ. ಅದು ಪಾಶ್ಚಾತ್ಯ ನಿದರ್ೇಶಕನ ಮೂಸೆಯಲ್ಲಿ ಬಂದಿದೆಯೊ ಅಥವಾ ನಮ್ಮದೇ ನಿದರ್ೇಶಕರ ಕಲ್ಪನೆಯೋ ಎಂಬುದಕ್ಕಿಂತ, ನಾವು ಕಂಡುಕೊಳ್ಳದ ಹೊಸತನವನ್ನು ತೋರಿಸಿಕೊಟ್ಟದಷ್ಟೇ ಮುಖ್ಯ. ಎಷ್ಟೋ ಭಾರತೀಯ ನಿದರ್ೇಶಕರ Objectionable ಸಿನೆಮಾಗಳಿಗಿಂತ ಇದು ಸಾವಿರ ಪಾಲು ಮೇಲು.
 

Entry filed under: Uncategorized. Tags: .

ಕವಡೆ ಕಿಮ್ಮತ್ತೂ ಇಲ್ಲದ ದಸರೆಯ ಕಾವಡಿಗಳು, ಮಾವುತರು! ಹಾಡಿಯ ಮಕ್ಕಳ ಅಕ್ಷರ ಯಾತ್ರೆ

1 Comment Add your own

  • 1. ರಂಜಿತ್  |  March 16, 2009 at 10:41 pm

    ಚಿತ್ರವನ್ನು ತೆಗಳೋರು ಒಮ್ಮೆ ಮೂಗು, ಕಣ್ಣು ತೆರೆದುಕೊಂಡು ಮುಂಬೈ ಸ್ಲಂಗಳಲ್ಲಿ ತಿರುಗಿ ಬರಲಿ.

    ಭಾರತೀಯರ ಕನಸುಗಳನ್ನು ಎನ್ನಾರೈ ಪಾತ್ರಗಳ ಮೂಲಕ ಬಿಂಬಿಸುವ ಕಭೀ ಖುಷಿ ಕಭೀ ಗಮ್ ನಂತಹ ಚಿತ್ರಕ್ಕೆ ಆಸ್ಕರ್ ಸಿಕ್ಕರೆ ಖುಷಿ ಪಾಡ್ತಾರೇನೋ ಅವರೆಲ್ಲಾ..:)

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Trackback this post  |  Subscribe to the comments via RSS Feed


 

January 2009
S M T W T F S
« Sep   Mar »
 123
45678910
11121314151617
18192021222324
25262728293031

Recent Posts

Blog Stats

  • 911 hits

Follow

Get every new post delivered to your Inbox.