ಹಾಡಿಯ ಮಕ್ಕಳ ಅಕ್ಷರ ಯಾತ್ರೆ
March 4, 2009 at 12:43 am Leave a comment
ದಟ್ಟಡವಿಯ ಮಧ್ಯೆ ಅಲ್ಲೊಂದು-ಇಲ್ಲೊಂದು ಹಾಡಿಗಳಲ್ಲಿ ಹಾಡುತ್ತಾ, ಆಡುತ್ತಾ ಕಳೆದುಹೋಗಬಹುದಾಗಿದ್ದ ಅಮೂಲ್ಯ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕಾಯಕ ಹೆಗ್ಗಡದೇವನಕೋಟೆಯ ಗೊಳೂರು ಹಾಡಿಯಲ್ಲಿ ಕೆಲ ವರ್ಷಗಳಿಂದ ಸದ್ದಿಲ್ಲದೆ ನಡೆದು ಬರುತ್ತಿದೆ. ದೈವ ದತ್ತವಾಗಿ ಬಂದ ಪ್ರಕೃತಿಯ ಅನುಕರಣಾ ಕೌಶಲ್ಯದ ಜೊತೆಗೆ ಬಾಹ್ಯ ಪ್ರಪಂಚದ ಆಗುಹೋಗುಗಳ ಬಗ್ಗೆಯೂ ಗಮನಹರಿಸತೊಡಗಿರುವ ಕಾಡಿನ ಮಕ್ಕಳ ಅಕ್ಷರ ಪ್ರಪಂಚದ ಬಗ್ಗೆ ಮೈಸೂರಿನ ವಾತರ್ಾ ಇಲಾಖೆಯ ಉಪನಿದರ್ೇಶಕರಾದಂತಹ ಎ ಆರ್ ಪ್ರಕಾಶ್ರವರು ಬೆಳಕು ಚೆಲ್ಲಿದ್ದಾರೆ.

ಅರಣ್ಯದ ಮಧ್ಯೆ ಎಲ್ಲ ಶೈಕ್ಷಣಿಕ ಹಾಗೂ ಇತರೆ ಮೂಲ ಸೌಲಭ್ಯಗಳಿಂದ ವಂಚಿತರಾಗಿ ಕಾಡಿನ ಕಿರು ಉತ್ಪನ್ನಗಳನ್ನೇ ಆಶ್ರಯಿಸಿ ಕಾಡಿನಲ್ಲೇ ಕಳೆದುಹೋಗಬಹುದಾಗಿದ್ದ 52 ಮಕ್ಕಳಿಗೆ ಇಲ್ಲಿ ಭವಿಷ್ಯದ ಬಗ್ಗೆ ಭರವಸೆಯಿದೆ. ಕಾಡಿನಿಂದ ಹೊರಬಂದು ನಾಡಿನಲ್ಲಿ ಬದುಕು ಕಟ್ಟಿಕೊಳ್ಳುವ ಆಶಾಭಾವನೆ ಇದೆ.
ಹೆಚ್.ಡಿ. ಕೋಟೆ ತಾಲ್ಲೂಕು ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೊಳೂರು ಹಾಡಿ ಹಾಗೂ ಸುತ್ತಮುತ್ತಲ ಹಾಡಿಯ 52 ಮಕ್ಕಳು ಗೊಳೂರು ಹಾಡಿಯ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕಲಿಯುತ್ತಿದ್ದಾರೆ. ಒಂದರಿಂದ ಏಳನೇ ತರಗತಿಯವರೆಗಿನ ಮಕ್ಕಳು ಈ ಪೈಕಿ ಸೇರಿದ್ದಾರೆ. ಒಂದನೇ ತರಗತಿಯಲ್ಲಿ 10, ಎರಡನೇ ತರಗತಿಯಲ್ಲಿ 5, ಮೂರನೇ ತರಗತಿಯಲ್ಲಿ 6, ನಾಲ್ಕನೇ ತರಗತಿಯಲಲಿ 6, 5ನೇ ತರಗತಿಯಲ್ಲಿ 9 ಹೀಗೆ ಮಕ್ಕಳ ಸಂಖ್ಯೆ ಎರಡು ಅಂಕಿ ತಲಪುವುದೇ ಕಷ್ಟ.

52 ಮಕ್ಕಳಿಗೆ ಪಾಠ ಹೇಳಲು 3 ಶಿಕ್ಷಕರು ಇದ್ದರೂ ಸ್ಥಳಾವಕಾಶದ ಕೊರತೆಯಿಂದ ಬೇರೆ ಬೇರೆ ತರಗತಿಗಳಿಗೆ ಸೇರಿದ ಎಲ್ಲ 52 ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಪಾಠ ಹೇಳಬೇಕಾದ ಅನಿವಾರ್ಯತೆ ಇದೆ. ಕೊಠಡಿ ನಿಮರ್ಾಣಕ್ಕೆ ಅರಣ್ಯದ ಕಾನೂನುಗಳು ಅಡಚಣೆಯಾದರೂ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರ ಉತ್ಸಾಹಕ್ಕೆ ಇದು ಅಡ್ಡಿಯಾಗಿಲ್ಲ. ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಶಿಕ್ಷಕರಿಗೂ ಭರವಸೆ ಇದೆ. 52 ಮಕ್ಕಳನ್ನು ಬೇರೆ ಬೇರೆ ಗುಂಪುಗಳಲ್ಲಿ ವಿಂಗಡಿಸಿಕೊಂಡು ಆಯಾ ತರಗತಿಯ ಪಾಠ ಹೇಳಿಕೊಡಲಾಗುತ್ತದೆ.
ಕೊಳ್ಳೇಗಾಲ ತಾಲ್ಲೂಕಿನ ದೊಡ್ಡರಾಜು ಹಾಗೂ ನಂಜನಗೂಡು ತಾಲ್ಲೂಕಿನ ಹರೀಶ್ ಇಲ್ಲಿ ಶಿಕ್ಷಕರು. ಹಾಡಿಗೆ ಸಮೀಪದಲ್ಲೇ ಕೊಠಡಿಯೊಂದನ್ನು ಬಾಡಿಗೆಗೆ ಪಡೆದುಕೊಂಡು ವಾಸಿಸುತ್ತಾ, ಪಟ್ಟಣದ ಕಡೆ ಮುಖ ಮಾಡದೆ ಹಾಡಿಯ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಈರ್ವರ ಸೇವೆ ಶ್ಲಾಘನೀಯ. ಇವರ ಜತೆಗೆ ಮತೋರ್ವ ಶಿಕ್ಷಕರು ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ. ಸಕರ್ಾರಿ ಉದ್ಯೋಗ ದೊರಕುವವರೆಗೆ ಎಲ್ಲಿಯಾದರೂ ಕೆಲಸ ಮಾಡಲು ಸಿದ್ದವೆಂದು ಹೇಳಿ, ನಂತರ ನಗರ ಪ್ರದೇಶಗಳಿಗೆ ವಗರ್ಾವಣೆ ಒತ್ತಡ ತರುವ ಸಕರ್ಾರಿ ನೌಕರರು ಇಂತಹವರಿಂದ ನಿಜಕ್ಕೂ ಪಾಠ ಕಲಿಯಬೇಕಾಗಿದೆ.

ಗಿರಿಜನರಲ್ಲಿ ಸಹಜವಾಗಿಯೇ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿಗೆ ಇದೆ. ಗಂಡು ಮಕ್ಕಳ ವ್ಯಾಮೋಹ ಕಡಿಮೆ ಇರುವುದು ಹಾಗೂ ಹೆಣ್ಣು ಭ್ರೂಣ ಹತ್ಯೆಯ ದುರಾಲೋಚನೆ ಇಲ್ಲದಿರುವುದು ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿಗೆ ಇರುವುದಕ್ಕೆ ಮತ್ತೊಂದು ಕಾರಣವಾಗಿದೆ. 52 ಮಕ್ಕಳ ಪೈಕಿ 31 ಹೆಣ್ಣು ಮಕ್ಕಳು ಇದ್ದಾರೆ.
ಶಾಲೆ ಕಲಿಯುತ್ತಿರುವ ಬಹುತೇಕ ಮೊದಲ ತಲೆಮಾರಿನ ಈ ಮಕ್ಕಳ ಕಲಿಕೆಗೆ ಇನ್ನಷ್ಟು ಸೌಲಭ್ಯ ಕಲ್ಪಿಸಬೇಕಾಗಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಸೇರುವಂತೆ ಈ ಮಕ್ಕಳನ್ನು ಸಜ್ಜುಗೊಳಿಸಲು ದೊಡ್ಡರಾಜು ಮತ್ತು ಹರೀಶ್ ಅವರಂತಹ ಶಿಕ್ಷಕರ ಉತ್ಸಾಹ, ತಮ್ಮ ದಿನನಿತ್ಯದ ತಾಪತ್ರಯದ ನಡುವೆಯೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಪೋಷಕರ ಬೆಂಬಲ ಅಗತ್ಯವಾಗಿದೆ.
ಶಾಲೆ ಹಾಗೂ ಅಂಗನವಾಡಿ ಎನ್ನುವ ಮತ್ತೆರಡು ಕುಟೀರಗಳು ಇಲ್ಲಿ ಇಲ್ಲದಿದ್ದರೆ ಗಿರಿಜನರ ಮತ್ತೊಂದು ತಲೆಮಾರಿಗೆ ಅರಣ್ಯವೇ ಆಶ್ರಯವಾಗಬೇಕಾಗಿತ್ತು. ಆದರೆ ಇದೀಗ ಶಾಲೆ ಪಯರ್ಾಯ ಬದುಕು ಕಲ್ಪಿಸುವ ಭರವಸೆ ಮೂಡಿಸಿದೆ.
ಅರಣ್ಯದಿಂದ ಹೊರಬಂದು ಬದುಕು ಕಂಡುಕೊಳ್ಳಲು ಇಚ್ಚಿಸುವ ಪ್ರತಿ ಗಿರಿಜನ ಕುಟುಂಬಕ್ಕೆ 10 ಲಕ್ಷ ರೂ. ನೀಡಿ ಅವರ ಬದುಕಿಗೆ ಸೌಲಭ್ಯ ಕಲ್ಪಿಸುವ ಯೋಜನೆ ಇದೆ. ಮೂಲಭೂತ ಸೌಲಭ್ಯಗಳ ಕೊರತೆ, ಶಿಕ್ಷಣ, ಆರೋಗ್ಯ ಮತ್ತಿತರ ನಾಗರಿಕ ಸೌಲಭ್ಯಗಳಿಂದ ದೂರವೇ ಉಳಿದರೂ, ಕಾಡಿನಲ್ಲೇ ಉಳಿಯಲು ಇಚ್ಚಿಸುವ ಗಿರಿಜನರಿಗೆ ಅವರು ಇರುವಲ್ಲೇ ಶಿಕ್ಷಣದ ಸೌಲಭ್ಯ ಒದಗಿಸುವ ಮೂಲಕ ಮುಂದಿನ ತಲೆಮಾರನ್ನಾದರೂ ಮುಖ್ಯ ವಾಹಿನಿಗೆ ತರುವ ಸಕರ್ಾರದ ಪ್ರಯತ್ನಕ್ಕೆ ಸಂಘಸಂಸ್ಥೆಗಳ ಬೆಂಬಲವೂ ಅಗತ್ಯವಾಗಿದೆ.

ಚಿತ್ರಗಳು : ಎ ಕೃಷ್ಣೋಜಿರಾವ್
Entry filed under: Uncategorized. Tags: .
Trackback this post | Subscribe to the comments via RSS Feed